ಪಾರಮಾರ್ಥಗವಿ ಮಠ, ಚಿದರವಳ್ಳಿ – ಬೊಮ್ಮನಹಳ್ಳಿ

ವಿಳಾಸ:

ನಿ.ಪ್ರ.ಸ್ವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಸಿದ್ಧರ ಹಳ್ಳಿ, ಪಾರಮಾರ್ಥ ಗವಿಮಠ, ಚಿದರವಳ್ಳಿ – ಬೊಮ್ಮನಹಳ್ಳಿ, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +919740231000, +919731003999

ಮಠದ ವಿವರ:

ಶ್ರೀ ಗವಿಮಠವು ಚಿದರಹಳ್ಳಿಯ ವಾಯುವ್ಯದಿಕ್ಕಿಗೆ 1 ಕಿ.ಮೀ ದೂರದಲ್ಲಿರುವ ಸಿದ್ಧರಗಿರಿಯ ಕಲ್ಲುಬೆಟ್ಟದ ತಪ್ಪಲಿನಲ್ಲಿ ಸ್ಥಾಪಿತವಾಗಿದೆ. ಬೆಟ್ಟದ ಹಿಂಬದಿಯಲ್ಲಿ ಹರಡುವ ಕಲ್ಲು ಶ್ರೇಣಿಗಳ ಮಧ್ಯೆ ಈ ಮಠವು ಪ್ರಕೃತಿದತ್ತ ರಮಣೀಯತೆಯನ್ನು ಹೊಂದಿದೆ. 1640ರಲ್ಲಿ ತಮಿಳುನಾಡಿನ ಅರುಣಾಚಲದಿಂದ ಬಂದ ಶಿವಯೋಗಿಯೊಬ್ಬರು ಈ ಪ್ರದೇಶದ ಏಕಾಂತತೆಗೆ ಆಕರ್ಷಿತರಾಗಿ ಇಲ್ಲಿ ಗವಿಯಲ್ಲಿ ಅನುಷ್ಠಾನ ಪ್ರಾರಂಭಿಸಿದರು. ಇವರ ಭಕ್ತಿಶ್ರದ್ಧೆಯಿಂದ ಪ್ರಭಾವಿತರಾದ ಸ್ಥಳೀಯರು ಗುರುಗಳ ದರ್ಶನಕ್ಕಾಗಿ ಬರಲು ಪ್ರಾರಂಭಿಸಿದರು. ಈ ಶ್ರೇಷ್ಠ ಯೋಗಿಗೆ ‘ಶ್ರೀ ಅರುಣಾಚಲಸ್ವಾಮಿ’ ಎಂದು ಹೆಸರಿಟ್ಟು ಗೌರವಿಸಲಾಯಿತು.

ಪರಂಪರೆ:

  1. ಶ್ರೀ ಅರುಣಾಚಲ ಸ್ವಾಮಿಗಳು
  2. ಶ್ರೀ ಗುರು ಶಾಂತಮೂರ್ತಿ ಸ್ವಾಮಿಗಳು
  3. ಶ್ರೀ ಷಡಕ್ಷರಿ ಶಿವಯೋಗಿಗಳು
  4. ಶ್ರೀ ಸದಾಶಿವ ದೇಶಿಕೇಂದ್ರ ಸ್ವಾಮಿಗಳು
  5. ಶ್ರೀ ಶಿವರುದ್ರ ದೇಶಿಕೇಂದ್ರ ಸ್ವಾಮಿಗಳು
  6. ಶ್ರೀ ಬಾಲ ಷಡಕ್ಷರಿ ಸ್ವಾಮಿಗಳು
  7. ಶ್ರೀ ಚನ್ನಸದಾಶಿವ ದೇಶಿಕೇಂದ್ರ ಸ್ವಾಮಿಗಳು
  8. ನಿ.ಪ್ರ.ಸ್ವ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಸಾಮಾಜಿಕ ಕಾರ್ಯಗಳು: