ವಿಳಾಸ:
ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಸಾಲೂರು ಬೃಹನ್ಮಠ, ಶ್ರೀ ಮಲೆಮಹದೇಶ್ವರ ಬೆಟ್ಟ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ ಮೊ. +919449133746,+919741154551
ಮಠದ ವಿವರ:
ಮಲೆಮಾದೇಶ್ವರ ಬೆಟ್ಟದಲ್ಲಿರುವ ಶ್ರೀ ಸಾಲೂರುಮಠವು ಧರ್ಮ ಜಾಗೃತಿಯ ಕೇಂದ್ರವಾಗಿದ್ದು, ಈ ಪ್ರದೇಶದಲ್ಲಿ ವೀರಶೈವ ಧರ್ಮದ ಬೆಳವಣಿಗೆಗೆ ನಾಂದಿಯಾಗಿದೆ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಶ್ರೀ ಮುಪ್ಪಿನಸ್ವಾಮಿಗಳೊಂದಿಗೆ ನಡುಮಲೆಯ ಜಾಗದಲ್ಲಿ ಶ್ರೀ ಮಾದೇಶ್ವರರು ಮಠವನ್ನು ಸ್ಥಾಪಿಸಿದರು. ಶಿವಮೊಗ್ಗದ ಶಿಕಾರಿಪುರದಿಂದ ಬಂದ ಶ್ರೀ ಸಾಲೂರುಸ್ವಾಮಿಗಳನ್ನು ಮೊದಲ ಗುರುಗಳಾಗಿ ನೇಮಕ ಮಾಡಲಾಯಿತು. ಈ ಕಾರಣದಿಂದ ಮಠವು “ಸಾಲೂರು ಮಠ” ಎಂದು ಕರೆಯಲ್ಪಡುತ್ತದೆ. ಷ.ಬ್ರ.ಸ್ವ. ಶ್ರೀ ಗುರುಸ್ವಾಮಿಗಳವರು ದಿನಾಂಕ 20/05/2025 ರಂದು ಲಿಂಗೈಕ್ಯರಾಗಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಸಾಲೂರುಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಕರಿಬಸವಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಾಂತಲಿಂಗಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಇಮ್ಮಡಿ ಸಾಲೂರುಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮುದ್ದುವೀರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಕೆಂಪನಂಜಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಾಂತಲಿಂಗಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧವೀರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುಂಡೇಗಾಲದಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಚೆನ್ನೂರಿನಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ದೇವರಹಳ್ಳಿಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧವೀರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಕೆಂಪನಂಜಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಾಂತಲಿಂಗಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಇಮ್ಮಡಿ ಮುದ್ದುವೀರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಮಹಾದೇವಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುರುಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀ ಮಾದೇಶ್ವರರ ತಪಸ್ಸಿನ ಸ್ಥಳಗಳಲ್ಲಿ ಲಿಂಗದೀಕ್ಷೆ, ಭಕ್ತರಿಗೆ ಆಶೀರ್ವಾದ, ಪವಾಡಗಳ ಪ್ರದರ್ಶನ, ಪ್ರಭುದೇವರಿಂದ ತ್ರಿಶೂಲ ದೀಕ್ಷೆ, ನಡುಮಲೆಯ ಮಠದಲ್ಲಿ ಸಾಮೂಹಿಕ ಲಿಂಗಧಾರಣೆಯು ಧಾರ್ಮಿಕ ಮುಖ್ಯ ಕಾರ್ಯಗಳಾಗಿವೆ. ಗಿರಿಜನರಲ್ಲಿ ಆಚಾರ-ವಿಚಾರ ಬೆಳೆಸುವಲ್ಲಿ ಈ ಮಠ ಪ್ರಮುಖ ಪಾತ್ರ ವಹಿಸಿದೆ.
ಸಾಮಾಜಿಕ ಕಾರ್ಯಗಳು:
ಸೋಲಿಗರು, ಕಾಡುಕುರುಬರು ಹಾಗೂ ಬೇಡ ಜನಾಂಗದ ಜನರಲ್ಲಿ ಶಿಕ್ಷಣ, ಅಹಿಂಸೆ ಮತ್ತು ಕೃಷಿಯ ಬಗ್ಗೆ ಅರಿವು ಮೂಡಿಸಲು ಶ್ರಮಿಸಿದ್ದು, ಜಾತಿ ಭೇದವಿಲ್ಲದ ಸಮಾಜ ನಿರ್ಮಾಣದ ಕನಸನ್ನು ನಡುಮಲೆಯ ಮೂಲಕ ಸಾಕಾರಗೊಳಿಸಲಾಗಿದೆ. ಕೃಷಿಯ ಕಾಯಕ, ಧರ್ಮೋಪದೇಶಗಳು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಎಪ್ಪತ್ತೇಳು ಮಲೆಗಳಲ್ಲಿ ಸಂಚಾರ ನಡೆಸಿ ಜನಜಾಗೃತಿ ಮೂಡಿಸಲು ಶ್ರೀ ಮಾದೇಶ್ವರರು ಹಾಗೂ ಅವರ ಅನುಯಾಯಿಗಳು ಮಾಡಿದ ಸೇವೆ ಅನನ್ಯವಾಗಿದೆ.