ಶ್ರೀ ಅಡವೀ ಮಠ, ಪಡುಗೂರು

ವಿಳಾಸ:

ಷ.ಬ್ರ.ಸ್ವ. ಶ್ರೀ. ಶಿವಲಿಂಗೇಂದ್ರ ಸ್ವಾಮಿಗಳವರು, ಶ್ರೀ ಅಡವಿ ಮಠ, ಪಡುಗೂರು, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571109
ಮೊ. +919448602867

ಮಠದ ವಿವರ:

ಶ್ರೀ ಅಡವಿ ಮಠವು ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಶೈವ ಮಠವಾಗಿದ್ದು, ಇದರ ಸಂಸ್ಥಾಪಕ ಶ್ರೀ ಮದ್ದಾನೆಶಾಂತೇಶ್ವರರು (ಶ್ರೀ ಕೋಲಶಾಂತೇಶ್ವರ) ಎಂಬ ವಿರಕ್ತಶ್ರೇಷ್ಠರು. ಅವರು ಶ್ರೀ ತೋಂಟದ ಸಿದ್ಧಲಿಂಗೇಶ್ವರರಿಂದ ಮಹಿಷಿ ಮಂಡಲ ಹಾಗೂ ಉದಕಮಂಡಲ ಪ್ರದೇಶಗಳ ಧರ್ಮಪ್ರಚಾರ ಕಾರ್ಯಕ್ಕೆ ನಿಯೋಜಿತರಾಗಿ, ತೆರಕಣಾಂಬಿಯಲ್ಲಿ ನೆಲೆಸಿ ವೀರಶೈವ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಧರ್ಮಪ್ರಚಾರದ ಸಮಯದಲ್ಲಿ ಅವರು ಪ್ರತಿಕೂಲತೆಗೂ ಒಳಗಾದರು. ತೆರಕಣಾಂಬಿಯ ದೊರೆ ಇವರ ವಿರುದ್ಧ ಕ್ರಮ ತೆಗೆದು, ಶ್ರೀಮದ್ದಾನೆಶಾಂತೇಶ್ವರರನ್ನು ಬಂಧಿಸಿ ಶಿಕ್ಷೆ ನೀಡಿದರೂ, ಅವರು ತಮ್ಮ ತಪೋಬಲದಿಂದ ಪವಾಡ ತೋರಿಸಿ ಅದೃಶ್ಯವಾಗಿ ಜನರ ನಡುವೆ ಧರ್ಮಜಾಗೃತಿ ಮೂಡಿಸಿದರು. ಈ ಪವಾಡಗಳನ್ನು ನೋಡಿ ಜಗಪತಿ ವಿಷಾದ ಪಟ್ಟು, ಗುರುವನ್ನು ಗೌರವದಿಂದ ಮರಳಿ ಆಹ್ವಾನಿಸಿ, “ಮದ್ದಾನೆ ಮಣಿಸಿದ ಮದ್ದಾನೇಶ್ವರ” ಎಂಬ ಬಿರುದು ನೀಡಿ ಸತ್ಕರಿಸಿದರು.

ಪರಂಪರೆ:

  1. ಷ.ಬ್ರ.ಸ್ವ.ಶ್ರೀ. ಮದ್ದಾನೇಶ್ವರಸ್ವಾಮಿಗಳು
  2. ಷ.ಬ್ರ.ಸ್ವ.ಶ್ರೀ. ಶಿವಲಿಂಗಸ್ವಾಮಿಗಳು
  3. ಷ.ಬ್ರ.ಸ್ವ.ಶ್ರೀ. ಜಡೆಸ್ವಾಮಿಗಳು
  4. ಷ.ಬ್ರ.ಸ್ವ.ಶ್ರೀ. ಮಹಾಂತದೇಶಿಕೇಂದ್ರಸ್ವಾಮಿಗಳು
  5. ಷ.ಬ್ರ.ಸ್ವ.ಶ್ರೀ. ವಿರಕ್ತಸ್ವಾಮಿಗಳು
  6. ಷ.ಬ್ರ.ಸ್ವ.ಶ್ರೀ. ಶಿವಕುಮಾರಸ್ವಾಮಿಗಳು
  7. ಷ.ಬ್ರ.ಸ್ವ.ಶ್ರೀ. ಶಿವಲಿಂಗೇಂದ್ರ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಪ್ರತಿವರ್ಷ: ಶ್ರೀಗಳ ಆರಾಧನೆ ಧನುರ್ಮಾಸದ ಪೂಜೆ, ಶಿವರಾತ್ರಿ, ಕಾರ್ತಿಕಪೂಜೆ, ಯುಗಾದಿ, ಲಿಂಗಾಧೀಕ್ಷೆ ಪೂಜೆ ಪ್ರತಿನಿತ್ಯ ಮಠಕ್ಕೆ ಬರುವ ಎಲ್ಲ ಭಕ್ತರಿಗೆ ಉಚಿತ ಪ್ರಸಾದ ಸಂಸ್ಥೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಎಲ್ಲಾ ವರ್ಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಸಾಮಾಜಿಕ ಕಾರ್ಯಗಳು:

ಶ್ರೀ ಶಿವಕುಮಾರಸ್ವಾಮಿಗಳು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ತೋರಿದ ಫಲವಾಗಿ: ಕಬ್ಬಹಳ್ಳಿಯಲ್ಲಿ ಪ್ರೌಢಶಾಲೆ ಹಾಗೂ ಶ್ರೀ ಮದ್ದಾನೇಶ್ವರ ವಿದ್ಯಾರ್ಥಿನಿಲಯ ಗುಂಡ್ಲುಪೇಟೆಯಲ್ಲಿ ಮತ್ತೊಂದು ಮದ್ದಾನೇಶ್ವರ ವಿದ್ಯಾರ್ಥಿನಿಲಯ ಮೈಸೂರು ನಗರದಲ್ಲಿ ಬಿಲ್ವಭವನ (ಶಾಖೆ) ಸ್ಥಾಪಿಸಿ ವಿದ್ಯಾರ್ಥಿನಿಲಯ ಆರಂಭಿಸಿದ್ದಾರೆ. ಪಡುಗೂರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಆಸ್ಪತ್ರೆ ನಿರ್ಮಿಸಿದ್ದಾರೆ. ಬಡಜನರಿಗೆ ಆರ್ಥಿಕ ಸಹಾಯ ನೀಡಿ, ಅವರನ್ನು Kayaka (ಕಾಯಕ) ಜೀವನದಲ್ಲಿ ಸ್ಥಿರಗೊಳಿಸಿದ್ದಾರೆ. ಮಠದಿಂದ ಪಬ್ಲಿಕ್‌ ಸ್ಕೂಲ್, ವೃದ್ಧಾಶ್ರಮ, ವಚನ ಮಾಂಗಲ್ಯ, ಸಾಮಾನ್ಯ ವಿವಾಹ ಕಾರ್ಯಕ್ರಮಗಳು ನಡೆಸಲಾಗುತ್ತಿದೆ.