ವಿಳಾಸ:
ಷ.ಬ್ರ.ಸ್ವ. ಶ್ರೀ. ಶಿವಲಿಂಗೇಂದ್ರ ಸ್ವಾಮಿಗಳವರು, ಶ್ರೀ ಅಡವಿ ಮಠ, ಪಡುಗೂರು, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571109ಮೊ. +919448602867
ಮಠದ ವಿವರ:
ಶ್ರೀ ಅಡವಿ ಮಠವು ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಶೈವ ಮಠವಾಗಿದ್ದು, ಇದರ ಸಂಸ್ಥಾಪಕ ಶ್ರೀ ಮದ್ದಾನೆಶಾಂತೇಶ್ವರರು (ಶ್ರೀ ಕೋಲಶಾಂತೇಶ್ವರ) ಎಂಬ ವಿರಕ್ತಶ್ರೇಷ್ಠರು. ಅವರು ಶ್ರೀ ತೋಂಟದ ಸಿದ್ಧಲಿಂಗೇಶ್ವರರಿಂದ ಮಹಿಷಿ ಮಂಡಲ ಹಾಗೂ ಉದಕಮಂಡಲ ಪ್ರದೇಶಗಳ ಧರ್ಮಪ್ರಚಾರ ಕಾರ್ಯಕ್ಕೆ ನಿಯೋಜಿತರಾಗಿ, ತೆರಕಣಾಂಬಿಯಲ್ಲಿ ನೆಲೆಸಿ ವೀರಶೈವ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಧರ್ಮಪ್ರಚಾರದ ಸಮಯದಲ್ಲಿ ಅವರು ಪ್ರತಿಕೂಲತೆಗೂ ಒಳಗಾದರು. ತೆರಕಣಾಂಬಿಯ ದೊರೆ ಇವರ ವಿರುದ್ಧ ಕ್ರಮ ತೆಗೆದು, ಶ್ರೀಮದ್ದಾನೆಶಾಂತೇಶ್ವರರನ್ನು ಬಂಧಿಸಿ ಶಿಕ್ಷೆ ನೀಡಿದರೂ, ಅವರು ತಮ್ಮ ತಪೋಬಲದಿಂದ ಪವಾಡ ತೋರಿಸಿ ಅದೃಶ್ಯವಾಗಿ ಜನರ ನಡುವೆ ಧರ್ಮಜಾಗೃತಿ ಮೂಡಿಸಿದರು. ಈ ಪವಾಡಗಳನ್ನು ನೋಡಿ ಜಗಪತಿ ವಿಷಾದ ಪಟ್ಟು, ಗುರುವನ್ನು ಗೌರವದಿಂದ ಮರಳಿ ಆಹ್ವಾನಿಸಿ, “ಮದ್ದಾನೆ ಮಣಿಸಿದ ಮದ್ದಾನೇಶ್ವರ” ಎಂಬ ಬಿರುದು ನೀಡಿ ಸತ್ಕರಿಸಿದರು.ಪರಂಪರೆ:
- ಷ.ಬ್ರ.ಸ್ವ.ಶ್ರೀ. ಮದ್ದಾನೇಶ್ವರಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಶಿವಲಿಂಗಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಜಡೆಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಮಹಾಂತದೇಶಿಕೇಂದ್ರಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ವಿರಕ್ತಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಶಿವಕುಮಾರಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಶಿವಲಿಂಗೇಂದ್ರ ಸ್ವಾಮಿಗಳು (ಪ್ರಸ್ತುತ)