ಶ್ರೀ ಬಸವಕಲ್ಯಾಣ ವಿರಕ್ತ ಮಠ, ಅಂಕನಹಳ್ಳಿ

ವಿಳಾಸ:

ನಿ.ಪ್ರ.ಸ್ವ. ಶ್ರೀ ವಿಜಯಕುಮಾರ ಸ್ವಾಮಿಗಳವರು, ಶ್ರೀ ಬಸವಕಲ್ಯಾಣ ವಿರಕ್ತ ಮಠ, ಅಂಕನಹಳ್ಳಿ , ಅಂಕನಹಳ್ಳಿ ಅಂಚೆ, ಚುಂಚನ ಕಟ್ಟೆ ಹೋಬಳಿ, ಕೆ.ಆರ್‌. ನಗರ ತಾಲ್ಲೂಕು, ಮೈಸೂರು ಜಿಲ್ಲೆ -571617
ಮೊ. 9448527999, 9964474706

ಮಠದ ವಿವರ:

ಕೆ.ಆರ್.ನಗರ ತಾಲ್ಲೂಕಿನ ಅಂಕನಹಳ್ಳಿಯು ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ 20 ಕಿಮೀ ದೂರವಿರುವ ಒಂದು ಚಿಕ್ಕ ಗ್ರಾಮ. ಇಲ್ಲಿ 1993 ರಲ್ಲಿ ಶ್ರೀ ಬಸವಕಲ್ಯಾಣ ವಿರಕ್ತಮಠವನ್ನು ಸ್ಥಾಪಿಸಲಾಯಿತು. 1995ರ ಮಾರ್ಚ್ 12 ರಂದು ನೂತನ ಗುರುಗಳಿಗೆ ಪಟ್ಟಾಧಿಕಾರ ನೀಡಿ ಮಠವನ್ನು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಯಿತು. ಈ ಮಠವು ಗ್ರಾಮಕ್ಕೆ ಧಾರ್ಮಿಕ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಪರಿಣಮಿಸಿದೆ.ಶ್ರೀ ವಿಜಯಕುಮಾರ ಸ್ವಾಮಿಗಳು ಪಠ್ಯ ವಿದ್ಯಾಭ್ಯಾಸವನ್ನು ನಿಲ್ಲಿಸದೆ, ಸಿದ್ಧಗಂಗೆಯಲ್ಲಿ ನೆಲೆಸಿ ವಿದ್ಯಾಭ್ಯಾಸ ಮುಗಿಸಿಕೊಂಡು ನಂತರ ಅಂಕನಹಳ್ಳಿಯ ಮಠದ ಪೂರ್ಣ ಉಸ್ತುವಾರಿ ವಹಿಸಿಕೊಂಡರು.

ಪರಂಪರೆ:

ಧಾರ್ಮಿಕ ಕಾರ್ಯಗಳು:

ಶ್ರೀ ವಿಜಯಕುಮಾರ ಸ್ವಾಮಿಗಳು ಬಸವಾದಿ ಶರಣರ ಮಾರ್ಗದರ್ಶನದಲ್ಲಿ ಧಾರ್ಮಿಕ ಸೇವೆ ನಿರಂತರವಾಗಿ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಕಾರ್ಯಗಳು:

ಮಠದ ಮೂಲಕ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳು, ಯುವಜನರಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸುವ ಆಶಯದೊಂದಿಗೆ ಶಿಬಿರಗಳು ಮತ್ತು ಉಪನ್ಯಾಸಗಳು ನಿಗದಿತ ಸಮಯದಲ್ಲಿ ನಡೆಯುತ್ತವೆ.