
ವಿಳಾಸ:
ಷ.ಬ್ರ.ಸ್ವ. ಶ್ರೀ ಬಾಲ ಷಡಕ್ಷರಸ್ವಾಮಿಗಳವರು, ಶ್ರೀ ಕರಡಿ ಮಠ, ಚಿಲಕವಾಡಿ, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆಮೊ.+919945584665
ಮಠದ ವಿವರ:
ಚಿಲಕವಾಡಿಯ ಶಂಭುಲಿಂಗ ಕ್ಷೇತ್ರದ ಗವಿಯಲ್ಲಿ ಅನುಷ್ಠಾನಗೊಂಡು ಶ್ರೀ ನಿಜಗುಣ ಶಿವಯೋಗಿಗಳು ಈ ಸ್ಥಳವನ್ನು ಸುಕ್ಷೇತ್ರವನ್ನಾಗಿ ಮಾಡಿದರು. ಈ ಭಾಗದಲ್ಲಿ ಕರಡಿಗಳು ವಾಸಿಸುತ್ತಿದ್ದ ಕಾರಣದಿಂದ ಈ ಮಠವನ್ನು ‘ಕರಡಿಮಠ’ ಎಂದೂ ಕರೆಯಲಾಗಿದೆ. ನಿಜಗುಣ ಶಿವಯೋಗಿಗಳು ಯೋಗಸಿದ್ಧಿ, ಧರ್ಮಸಿದ್ಧಿ ಹಾಗೂ ಸಾಹಿತ್ಯಸಿದ್ಧಿಯ ಸಾಧಕರಾಗಿದ್ದರು. ನಿಜಗುಣ ಅನುಭವ ಮಂಟಪವು ಅವರ ಸಾಹಿತ್ಯದ ಹಾಗೂ ತತ್ತ್ವದ ಪ್ರಚಾರಕ್ಕಾಗಿ ಸ್ಥಾಪಿಸಲಾಗಿದೆ. 1971 ರಲ್ಲಿ ಪಿ. ಬಸವಣ್ಣ ಅವರು ವಿರಕ್ತಾಶ್ರಮವನ್ನು ಸ್ವೀಕರಿಸಿ ಶ್ರೀ ಕುಮಾರ ನಿಜಗುಣಸ್ವಾಮಿಗಳೆಂದು ಹೆಸರು ಪಡೆದು, 1983 ರಲ್ಲಿ ಮಂಟಪ ನಿರ್ಮಾಣ ಪ್ರಾರಂಭಿಸಿ 1991 ರಲ್ಲಿ ಮುಗಿಸಿದ್ದಾರೆ.ನಿಜಗುಣ ಶಿವಯೋಗಿಗಳ ಗವಿಯಲ್ಲಿ ಶ್ರೀ ಕುಮಾರಸ್ವಾಮಿಗಳು ವಾಸಮಾಡಿ, ಶಿವಯೋಗವನ್ನು ಸಾಧಿಸುತ್ತಿದ್ದಾರೆ. ಮಂಟಪದಲ್ಲಿ ನಿಜಗುಣರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಕೊಲಂಡೆಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುಂಡಪ್ಪಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಕುಮಾರಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಪ್ರಕಾಶಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಬಾಲ ಷಡಕ್ಷರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ನಿಜಗುಣ ಜಯಂತಿ, ಬಸವ ಜಯಂತಿ, ಶ್ರಾವಣ ಮಾಸದ ಪೂಜೆಗಳು ಇಲ್ಲಿ ನಿಯಮಿತವಾಗಿ ನೆರವೇರಿಸುತ್ತವೆ. ಪ್ರವಚನ ವೇದಿಕೆ, ಸಂಗೀತ ವೇದಿಕೆ, ಸಂಗೀತ ಪರಿಕರಗಳ ಜೊತೆಗೆ ಅಧ್ಯಯನ ಕೇಂದ್ರವನ್ನಾಗಿ ರೂಪಾಂತರವಾಗಿದೆ.
ಸಾಮಾಜಿಕ ಕಾರ್ಯಗಳು:
ನಿಜಗುಣರ ಕೃತಿಗಳನ್ನು ಸರಳ ಭಾಷೆಯಲ್ಲಿ ಪ್ರಕಟಿಸಿ, ‘ಬೋಳು ಬಸವನ ಬೊಂತೆ’ ಪುಸ್ತಕವನ್ನು ಪ್ರಕಟಿಸಿ ಅದರ ಆದಾಯವನ್ನು ಮಂಟಪ ನಿರ್ಮಾಣಕ್ಕೆ ಬಳಕೆ ಮಾಡಿದಂತೆ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.