ಶ್ರೀ ಪಟ್ಟದ ಮಠ, ಹೊಂಡರಬಾಳು

ವಿಳಾಸ:

ಷ.ಬ್ರ.ಸ್ವ.ಶ್ರೀ ನೀಲಕಂಠ ಶಿವಾಚಾರ್ಯಸ್ವಾಮಿಗಳವರು, ಶ್ರೀ ಪಟ್ಟದ ಮಠ,ಮಧುವನಹಳ್ಳಿ ಅಂಚೆ, ಹೊಂಡರಬಾಳು, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ- 571342
ಮೊ. +919449702976

ಮಠದ ವಿವರ:

ಹೊಂಡರಬಾಳು ಎಂಬ ಈ ಊರು ದೊಡ್ಡ ಹೊಂಡದ ದಂಡೆಯಲ್ಲಿ ಸ್ಥಾಪಿತವಾದುದರಿಂದ ಈ ಹೆಸರು ಬಂದಿದೆ. ಪಾಂಡವಕಾಲದ ನೆನಪನ್ನು ಬೆಟ್ಟದಲ್ಲಿ ಕಾಣಬಹುದಾಗಿದೆ. ಈ ಊರಲ್ಲಿ ಸ್ಥಾಪಿತವಾದ ಶ್ರೀ ಶಂಖನಮಠವು ಶ್ರೀ ಶಂಖನಸ್ವಾಮಿಗಳಿಂದ ಸ್ಥಾಪಿತವಾಗಿದ್ದು ಸುಮಾರು ೮೦೦ ವರ್ಷಗಳ ಇತಿಹಾಸವಿದೆ. ಈ ಮಠವು ಒಟ್ಟು ೧೬ ಮಂದಿ ಶ್ರೀಗಳ ಪೀಠವನ್ನು ಕಂಡಿದೆ. ಪ್ರಸಕ್ತ ಪೀಠಾಧ್ಯಕ್ಷರಾದ ಷ.ಬ್ರ.ಸ್ವ.ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಸುಮಾರು ೪೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಠದ ಬಳಿ ಶ್ರೀ ಶಂಖನಸ್ವಾಮಿಗಳು ಗುರುಗಳ ಗದ್ದುಗೆ ಬಳಿ ನೆಲೆನಿಂತು ಯೋಗಸಿದ್ಧಿಯ ಮೂಲಕ ಮಹಾಪುರುಷರಾದರು. ಮಠದ ಹೊರ ಆವರಣದಲ್ಲಿ ಬಸವನ ಎದುರು ಗದ್ದುಗೆಯೊಂದಿದೆ. ಪ್ರಸಕ್ತ ಶ್ರೀಗಳಾದ ಶ್ರೀ ನೀಲಕಂಠ ಶಿವಾಚಾರ್ಯಸ್ವಾಮಿಗಳು ಎಂ.ಎ. ಸಂಸ್ಕೃತ ಪದವಿಧರರಾಗಿದ್ದು, ೨೬ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೩೦ ವರ್ಷಗಳಿಂದ ಮಠದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಹಳೆ ಕಟ್ಟಡವನ್ನು ತೆರಳಿ ಹತ್ತು ಲಕ್ಷ ವೆಚ್ಚದಲ್ಲಿ ನೂತನ ಮಠ ನಿರ್ಮಿಸಲಾಗಿದೆ. ಹನ್ನೆರಡು ಗದ್ದುಗೆಗಳಿಗೆ ಮಂಟಪವನ್ನು ಆರು ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಠದಲ್ಲಿ ಪ್ರತಿದಿನ ಭಜನೆ, ಪ್ರವಚನ, ತ್ರಿಕಾಲ ಪೂಜೆ, ಭಕ್ತರಿಗೆ ದಾಸೋಹ ಮುಂತಾದ ಧಾರ್ಮಿಕ ಸೇವೆಗಳು ನಡೆಯುತ್ತವೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಶಂಖನಶಿವಾಚಾರ್ಯಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ನೀಲಕಂಠ ಶಿವಾಚಾರ್ಯಸ್ವಾಮಿಗಳು
  3. ಷ.ಬ್ರ.ಸ್ವ. ಶ್ರೀ ಶಿವಪ್ಪ ಶಿವಾಚಾರ್ಯಸ್ವಾಮಿಗಳು
  4. ಷ.ಬ್ರ.ಸ್ವ. ಶ್ರೀ ಮಹಾಂತ ಶಿವಾಚಾರ್ಯಸ್ವಾಮಿಗಳು
  5. ಷ.ಬ್ರ.ಸ್ವ. ಶ್ರೀ ಜಡೇರುದ್ರಸ್ವಾಮಿಗಳು
  6. ಷ.ಬ್ರ.ಸ್ವ. ಶ್ರೀ ಬುದಿಹಾಳಸ್ವಾಮಿಗಳು
  7. ಷ.ಬ್ರ.ಸ್ವ. ಶ್ರೀ ಮಲ್ಲಪ್ಪಸ್ವಾಮಿಗಳು
  8. ಷ.ಬ್ರ.ಸ್ವ. ಶ್ರೀ ನಿಜಗುಣಸ್ವಾಮಿಗಳು
  9. ಷ.ಬ್ರ.ಸ್ವ. ಶ್ರೀ ಷಡಕ್ಷರಸ್ವಾಮಿಗಳು
  10. ಷ.ಬ್ರ.ಸ್ವ. ಶ್ರೀ ಇಮ್ಮಡಿ ಮಹಾಂತದೇವರು
  11. ಷ.ಬ್ರ.ಸ್ವ. ಶ್ರೀ ಶಂಕರಕುಮಾರಸ್ವಾಮಿಗಳು
  12. ಷ.ಬ್ರ.ಸ್ವ. ಶ್ರೀ ದ್ದೇಶ್ವರಸ್ವಾಮಿಗಳು
  13. ಷ.ಬ್ರ.ಸ್ವ. ಶ್ರೀ ಅಡವಿ ಸಿದ್ದೇಶ್ವರಸ್ವಾಮಿಗಳು
  14. ಷ.ಬ್ರ.ಸ್ವ. ಶ್ರೀ ಪ್ರಸನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
  15. ಷ.ಬ್ರ.ಸ್ವ. ಶ್ರೀ ಶಂಕರ ಶಿವಾಚಾರ್ಯಸ್ವಾಮಿಗಳು
  16. ಷ.ಬ್ರ.ಸ್ವ. ಶ್ರೀ ನೀಲಕಂಠ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಈ ಮಠವು ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಭಿಕ್ಷದ ಸಂಪ್ರದಾಯದಲ್ಲಿ ಬೆಳೆದಿದೆ. ಪ್ರತಿನಿತ್ಯ ಭಜನೆ, ವಾರದಲ್ಲಿ ಒಂದು ಪ್ರವಚನ ಕಾರ್ಯಕ್ರಮ, ವರ್ಷಕ್ಕೊಮ್ಮೆ ಹಿರಿಯ ಶ್ರೀಗಳ ಆರಾಧನೆ, ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಅನ್ನದಾಸೋಹ, ಹಾಗೂ ಕರ್ತೃ ಗದ್ದುಗೆಗೆ ತ್ರಿಕಾಲ ಪೂಜೆ ನಡೆಯುತ್ತವೆ. ಬಡ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಸಿದ್ದೇಶ್ವರ ಜಾತ್ರೆಯ ದಿನ ಸುಮಾರು ೧೦,೦೦೦ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದೆ. ಮಠದ ವಾತಾವರಣದಲ್ಲಿ ಶ್ರೀ ಮಲೆಮಹದೇಶ್ವರರ ದಿವ್ಯ ಆವರಣವಿದೆ ಎಂಬ ನಂಬಿಕೆ ಇದೆ.

ಸಾಮಾಜಿಕ ಕಾರ್ಯಗಳು:

ಬಸವಭವನ ಕಲ್ಯಾಣ ಮಂಟಪ ನಿರ್ಮಿಸಿ ಉಚಿತ ವಿವಾಹ ಆಯೋಜಿಸುತ್ತಿದ್ದಾರೆ. ಮಠದ ದೈನಂದಿನ ಉತ್ಪತ್ತಿ ಮತ್ತು ಭಕ್ತರಿಂದ ಬಂದ ಹಣವನ್ನು ಅಭಿವೃದ್ದಿಗೆ ಬಳಸಲಾಗುತ್ತಿದೆ. ಮುಂದಿನ ಹಂತದಲ್ಲಿ ಸ್ವಂತ ಶಾಲೆ ಆರಂಭಿಸುವ ಯೋಜನೆ ಇದೆ. ಈ ಮೂಲಕ ಮಠವು ಎಲ್ಲಾ ವರ್ಗದ ಜನರಿಗೆ ಧಾರ್ಮಿಕ ಮತ್ತು ಸಾಮಾಜಿಕ ಶ್ರೇಯಸ್ಸನ್ನು ನೀಡುತ್ತಿದೆ.