ವಿಳಾಸ:
ಷ.ಬ್ರ.ಸ್ವ.ಶ್ರೀ ಸದಾನಂದ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಹುರುಳಿನಂಜನಪುರ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಮೊ.+919686605077
ಮಠದ ವಿವರ:
ಹುರುಳಿನಂಜನಪುರ-ಶ್ರೀ ಪಟ್ಟದ ಮಠವು ಚಾಮರಾಜನಗರದಿಂದ ೧೫ ಕಿ.ಮೀ ದೂರದಲ್ಲಿದೆ. ಇದನ್ನು ‘ಸರಗೂರು ಮಠ’ ಎಂದೂ ಕರೆಯುತ್ತಾರೆ. ಸುತ್ತೂರು ಶಾಖಾ ಮಠವಾಗಿ ಆರಂಭವಾದ ಈ ಮಠವು ನಂತರ ಪಟ್ಟದ ಮಠವಾಗಿ ಬೆಳವಣಿಗೆಯಾಯಿತು. ಸುಮಾರು ೧೫೦ ವರ್ಷಗಳ ಹಿಂದೆ ಉತ್ತರ ಭಾರತದಿಂದ ಬಂದ ಶರಣರೊಬ್ಬರು ಇಲ್ಲಿ ನೆಲಸಿ ಅನೇಕ ಪವಾಡಗಳನ್ನು ಮಾಡಿ ಜನರ ಮನಗೆದ್ದು ಮಠವನ್ನು ಸ್ಥಾಪಿಸಿದರೆಂದು ನಂಬಲಾಗುತ್ತದೆ. ಮೈಸೂರು ಒಡೆಯರು ಮತ್ತು ಟಿಪ್ಪು ಸುಲ್ತಾನರು ಈ ಮಠಕ್ಕೆ ಭೇಟಿಕೊಟ್ಟು, ಗುರುಗಳಿಂದ ಆಶೀರ್ವಾದ ಪಡೆದು ವಿವಿಧ ಕಾಣಿಕೆಗಳನ್ನು ನೀಡಿದ್ದಾರೆ. ಮಠದ ಆವರಣದಲ್ಲಿ ನಾಲ್ಕು ಗದ್ದುಗೆಗಳಿದ್ದು, ೧೯೯೬ ರಲ್ಲಿ ಲಿಂಗೈಕ್ಯರಾದ ವಿದ್ವಾನ್ ಪಟ್ಟದ ಶ್ರೀ ಗುರುಸ್ವಾಮಿಗಳ ಗದ್ದುಗೆ ಮಾತ್ರ ಗುರುತಿಸಲಾಗಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಗುರುಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸದಾನಂದ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
- ಶಿವರಾತ್ರಿ ಪೂಜೆ
- ಕಾರ್ತಿಕ ಪೂಜೆ
- ಅಮಾವಾಸ್ಯೆ ಪೂಜೆ
- ಬಸವಜಯಂತಿ
- ಗುರುಗಳ ಆರಾಧನೆ
- ಧರ್ಮದ ಸಾಧನೆಗೆ ಶ್ರಮ
ಸಾಮಾಜಿಕ ಕಾರ್ಯಗಳು:
- ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ
- ವಿವಾಹ, ಗೃಹ ಪ್ರವೇಶ, ಭಿನ್ನಹ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು
- ತಮಿಳುನಾಡಿನ ಊಟಿ, ದೇನಾಡು, ಇಟ್ಟಗಲು ಮುಂತಾದ ಸ್ಥಳಗಳಲ್ಲಿ ಭಕ್ತರಿಗೆ ಸೇವೆ