ವಿಳಾಸ:
ಷ.ಬ್ರ.ಸ್ವ. ಶ್ರೀ ಪಂಚಾಕ್ಷರಿ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಹಂಡರಕಳ್ಳಿ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ.ಮೊ. +919845639272
ಮಠದ ವಿವರ:
ಅಂಡರಕಳ್ಳಿ ಶ್ರೀ ಶೈಲ ಶಾಖಾ ಮಠವು ಈ ಭಾಗದ ಪ್ರಮುಖ ಮಠವಾಗಿದ್ದು, ಅನೇಕ ಭಕ್ತರನ್ನು ಹೊಂದಿದೆ. ಈ ಮಠದ ಸ್ಥಾಪನೆಯ ಬಗ್ಗೆ ‘ವ್ಯಾಸ ತೋಳ ಶಿಲಾಶಾಸನ’ದಿಂದ ಮಾಹಿತಿ ದೊರೆಯುತ್ತದೆ. ಚೋಳರ ಕಾಲದಲ್ಲಿ ಈ ಗ್ರಾಮ ‘ನಾಲ್ವಪುರಿ’ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮಠ ೪೦೦ ವರ್ಷಗಳ ಹಿಂದೆ ಸ್ಥಾಪಿತವಾಗಿದೆ. ಉತ್ತರದಿಂದ ಬಂದ ಕಾಯಕಸ್ವಾಮಿಗಳು ಮಠದ ಪ್ರಾರಂಭ ಮಾಡಿದ್ದಾರೆ. ಅವರು ಭಕ್ತಿಯಿಂದ ನಿರಂತರ ಧ್ಯಾನದಲ್ಲಿ ತೊಡಗಿದ್ದರಿಂದ ‘ಶ್ರೀ ಕಾಯಕ ಸ್ವಾಮಿ’ ಎಂಬ ಗೌರವನಾಮವನ್ನು ಪಡೆಯುವಂತೆ ಆಯಿತು. ಅವರು ನಿತ್ಯ ಧ್ಯಾನಮಾಡಿ, ಮೂರುಕಾಸಿನ ಕಾಣಿಕೆಗಳಿಂದ ದಾಸೋಹದ ಸಾಮಾಗ್ರಿ ಸಂಗ್ರಹಿಸುತ್ತಿದ್ದರು. ನಂತರ ಭಕ್ತರು ಮಠವನ್ನು ನಿರ್ಮಿಸಿದರು.
ಪರಂಪರೆ:
- ಷ.ಬ್ರ.ಸ್ವ.ಶ್ರೀ. ಕಾಯಕ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಶಿವಾನಂದ ಪಂಚಾಕ್ಷರಿ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ. ಪರ್ವತ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ.ವಿದ್ವಾನ್ ಪಂಚಾಕ್ಷರಿ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದ ಮೂಲ ಗುರುಗಳಾದ ಶ್ರೀ ಕಾಯಕಸ್ವಾಮಿಗಳ ಗದ್ದುಗೆಗೆ ನಿತ್ಯಪೂಜೆಯ ವ್ಯವಸ್ಥೆಯಿದೆ. ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಗದ್ದುಗೆ ಯರಗಂಬಳಿ ಗ್ರಾಮದಲ್ಲಿ, ಶ್ರೀ ಶಿವಾನಂದ ಪಂಚಾಕ್ಷರಿಶಿವಾಚಾರ್ಯಸ್ವಾಮಿಗಳ ಗದ್ದುಗೆ ಮಠದಲ್ಲೇ ನಿರ್ಮಿಸಲಾಗಿದೆ. ಪರ್ವತಶಾಸ್ತಿಗಳ ಗದ್ದುಗೆಯು ಮಠದ ಬಾವಿಯ ಹತ್ತಿರವಿದೆ. ಈ ಗದ್ದುಗೆಗಳಿಗೆ ಕಾರ್ತಿಕ, ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆ, ಹಿರಿಯ ಗುರುಗಳ ಆರಾಧನೆಯು ನಡೆಯುತ್ತದೆ. ಅನ್ನದಾಸೋಹ, ಜ್ಞಾನ ದಾಸೋಹ ಕೂಡ ಇದೆ.
ಸಾಮಾಜಿಕ ಕಾರ್ಯಗಳು:
ಮಠದಲ್ಲಿ ಸಾಮೂಹಿಕ ವಿವಾಹ, ಲಿಂಗಾದೀಕ್ಷೆ, ಪಂಚಕಲ್ಯಾಣ, ವಚನಮಾಂಗಲ್ಯ, ಬಸವತತ್ವದ ಪ್ರಚಾರ, ಶಿವರಾತ್ರಿ, ಧನೂರ್ಮಾಸ ಪೂಜೆಗಳು ಇತ್ಯಾದಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನೇರವೇರಿಸಲಾಗುತ್ತದೆ. ಕಲ್ಯಾಣಮಂಟಪ, ಪ್ರಸಾದನಿಲಯ, ಗೋಶಾಲೆ ನಿರ್ಮಾಣದ ಯೋಜನೆಗಳಿವೆ. ಪ್ರತಿ ದಿನ ಉಚಿತದಾಸೋಹ ವ್ಯವಸ್ಥೆ ನಡೆಸಲಾಗುತ್ತದೆ. ಗ್ರಾಮಸ್ಥರ ಸಹಕಾರವೂ ಉತ್ತಮವಾಗಿದೆ. ಶ್ರೀಗಳ ನೇತೃತ್ವದಲ್ಲಿ ಮಠವು ಶ್ರದ್ಧಾ ಹಾಗೂ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ.