ವಿಳಾಸ:
ಷ.ಬ್ರ.ಸ್ವ. ಶ್ರೀ ತೋಂಟದಾರ್ಯಸ್ವಾಮಿಗಳವರು, ಶ್ರೀ ಪಟ್ಟದ ಮಠ, ಕೆಸ್ತೂರು, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ.+919901838944
ಮಠದ ವಿವರ:
ಕೆಸ್ತೂರು ಗ್ರಾಮದ ಮಧ್ಯದಲ್ಲಿ ಶ್ರೀ ಪಟ್ಟದ ಮಠವು ಸ್ಥಾಪನೆಯಾಗಿ, ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ. ಇದನ್ನು ದೇವನೂರಿನ ಶ್ರೀ ಗುರುಮಲ್ಲೇಶ್ವರರು ಸ್ಥಾಪಿಸಿದಂತೆಯೆಂದು ನಂಬಲಾಗುತ್ತದೆ. ಸುಮಾರು ೧೦೦-೧೨೦ ವರ್ಷಗಳ ಇತಿಹಾಸ ಹೊಂದಿರುವ ಈ ಮಠವು ದಾಸೋಹ ಸೇವೆಯ ಮೂಲಕ ಭಕ್ತರಿಗೆ ಧಾರ್ಮಿಕ ಸೇವೆ ಸಲ್ಲಿಸುತ್ತಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ನಾಗಲಿಂಗಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ದರಾಮದೇವರು
- ಷ.ಬ್ರ.ಸ್ವ. ಶ್ರೀ ತೋಂಟದಾರ್ಯಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
ಶಿವರಾತ್ರಿ, ಕಾರ್ತಿಕಪೂಜೆ, ಲಿಂಗಧಾರಣೆ, ಮದುವೆ ಸಮಾರಂಭ, ಆರಾಧನಾ ಮಹೋತ್ಸವ, ಪಾದಪೂಜೆ, ಭಜನೆ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಶ್ರೀ ನಾಗಲಿಂಗ ಮತ್ತು ಶ್ರೀ ಸಿದ್ದರಾಮಸ್ವಾಮಿಗಳ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಸಾಮಾಜಿಕ ಕಾರ್ಯಗಳು:
ಶ್ರೀಮಠವು ಪ್ರತಿವರ್ಷ ಊರಿನ ಸಹಕಾರದಿಂದ ನಾಟಕ ಪ್ರದರ್ಶನ ಮಾಡುತ್ತದೆ. ಉಚಿತ ಪ್ರಸಾದ ವ್ಯವಸ್ಥೆ, ಮತಭೇಧವಿಲ್ಲದೆ ಭಕ್ತರಿಗೆ ಸೇವೆ, ಹಬ್ಬ, ಗೃಹಪ್ರವೇಶ ಮುಂತಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿಸುತ್ತಾರೆ.