ವಿಳಾಸ:
ಷ.ಬ್ರ.ಸ್ವ.ಶ್ರೀ ಶಿವಶಂಕರ ಸ್ವಾಮಿಗಳವರು, ಶ್ರೀ ಪಟ್ಟದ ಮಠ, ಹೊನ್ನೂರು ಅಂಚೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ.+917353295064
ಮಠದ ವಿವರ:
ಹೊನ್ನೂರು ಗ್ರಾಮದ ಶ್ರೀ ದಾಸೋಹ ಮಠ (ಮಲ್ಲನ ಮೂಲೆಯ ಶಾಖೆ) ೧೯೦೨ರಲ್ಲಿ ಪ್ರಾರಂಭವಾದ ಮಠವಾಗಿದೆ. ಈ ಮಠವು ಪ್ರಾರಂಭದಲ್ಲಿ ಚಾವಡಿಯಂತೆ ಇತ್ತು. ನಂಜನಗೂಡು ತಾಲ್ಲೂಕಿನ ಮಲ್ಲನ ಮೂಲೆಯ ಶ್ರೀ ಕಂಬಳೇಶ್ವರಮಠದ ಶಾಖೆ ರೂಪದಲ್ಲಿ ಸ್ಥಾಪಿತವಾಗಿದೆ. ಭಕ್ತರ ಶ್ರದ್ಧಾ ಹಾಗೂ ಗ್ರಾಮಸ್ಥರ ಸಹಕಾರದಿಂದ ಮಠವು ಬೆಳೆಯಿತು. ಪ್ರಾರಂಭದಲ್ಲಿ ಶ್ರೀ ಪುಟ್ಟಬಸಪ್ಪ ಸ್ವಾಮಿಗಳನ್ನು ಪಟ್ಟಾಧಿಕಾರಿಯಾಗಿಸಿ ಧರ್ಮ ಪ್ರಚಾರ, ದಾಸೋಹ ಸೇವೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಭಕ್ತರಲ್ಲಿ ಭರವಸೆ ಮೂಡಿಸಿದರು.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಪುಟ್ಟಬಸಪ್ಪ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಾಂಬಸದಾಶಿವ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವಶಂಕರ ಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
- ಶಿವರಾತ್ರಿ ಪೂಜೆ
- ಧನುರ್ಮಾಸದ ಪೂಜೆ
- ಕಾರ್ತಿಕ ಪೂಜೆ
- ಬಸವಜಯಂತಿ
- ಲಿಂಗದೀಕ್ಷೆ
- ಬಸವತತ್ವ ಪ್ರಚಾರ
- ಭಜನೆ ಕಾರ್ಯಕ್ರಮ
- ಆರಾಧನಾ ಉತ್ಸವ
ಸಾಮಾಜಿಕ ಕಾರ್ಯಗಳು:
- ಉಚಿತ ದಾಸೋಹ ಸೇವೆ
- ಉಚಿತ ವಿವಾಹ ಕಾರ್ಯಕ್ರಮಗಳು
- ಭಕ್ತರ ಸೇವೆ
- ಹಬ್ಬ ಹರಿದಿನಗಳ ಆಚರಣೆ
- ಗ್ರಾಮಸ್ಥರ ಸಹಕಾರದಿಂದ ವಿವಿಧ ಸಾಮಾಜಿಕ ಚಟುವಟಿಕೆಗಳು