ಶ್ರೀ ವಿರಕ್ತ ಮಠ, ಕಾರಾಪುರ

ವಿಳಾಸ:

ನಿ.ಪ್ರ.ಸ್ವ.ಶ್ರೀ ಬಸವರಾಜ ಸ್ವಾಮಿಗಳವರು, ಶ್ರೀ ವಿರಕ್ತಮಠ, ಕಾರಾಪುರ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571441
ಮೊ.+919880384265

ಮಠದ ವಿವರ:

ಯಳಂದೂರಿನ ವಾಯುವ್ಯ ದಿಕ್ಕಿನಲ್ಲಿ, ಸುವರ್ಣಾವತಿ ನದಿಯ ದಡದಲ್ಲಿ ಹರಿಯುವ ಪ್ರಕೃತಿ ಸೌಂದರ್ಯದ ನಡುವೆ ಸ್ಥಾಪನೆಯಾದ ಶ್ರೀ ಕಾರಾಪುರ ವಿರಕ್ತಮಠವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರಭೆಯನ್ನು ಹರಡುತ್ತಿರುವ ಪ್ರಮುಖ ಕೇಂದ್ರವಾಗಿದೆ. ಈ ಮಠ ಚೋಳ, ಟಿಪ್ಪು ಸುಲ್ತಾನ್, ಮೈಸೂರು ಅರಸರು ಸೇರಿದಂತೆ ಹಲವರಿಂದ ದತ್ತಿ ಪಡೆದಿದ್ದು, ಶಿಲಾಶಾಸನಗಳ ಪ್ರಕಾರ ಇದರ ಇತಿಹಾಸ ಅನೇಕ ಶತಮಾನಗಳಿಗೆ ವಿಸ್ತರಿಸಿದೆ. ೧೨೬ ಮಠಗಳ ಗುರುಗಳು ಇಲ್ಲಿಂದ ನಿರ್ವಹಣೆಯಲ್ಲಿದ್ದ ಉಲ್ಲೇಖಗಳು ಇತಿಹಾಸವನ್ನು ವಿಭಿನ್ನವಾಗಿಸುತ್ತವೆ. ಕಾರಾಪುರದ ತಾಮ್ರಶಾಸನಗಳು, ಮಠದ ಸ್ಥಾಪನೆ ಮತ್ತು ಆಳ್ವಿಕೆಯನ್ನು ದಾಖಲಿಸುತ್ತವೆ.ಇಲ್ಲಿ ವೈರಾಗ್ಯ ನಿಧಿ ಅಲ್ಲಮಪ್ರಭುಗಳು, ಶ್ರೀ ಮಲೆಮಹಾದೇಶ್ವರರು, ಅಥಣಿಯ ಶ್ರೀ ಮುರುಗೇಂದ್ರಶಿವಯೋಗಿಗಳು ಹಾಗೂ ಹಾನಗಲ್ಲಿನ ಶ್ರೀ ಕುಮಾರ ಸ್ವಾಮಿಗಳು ಅನುಷ್ಠಾನಗೊಂಡ ಪುಣ್ಯ ಕ್ಷೇತ್ರವಾಗಿದೆ.

ಪರಂಪರೆ:

  1. ನಿ.ಪ್ರ.ಸ್ವ.ಶ್ರೀ ಸುಖಿಚಾಮರಾಜ ದೇಶಿಕೇಂದ್ರಸ್ವಾಮಿಗಳು
  2. ನಿ.ಪ್ರ.ಸ್ವ.ಶ್ರೀ ಮಹಾಲಿಂಗಸ್ವಾಮಿಗಳು
  3. ನಿ.ಪ್ರ.ಸ್ವ.ಶ್ರೀ ಗುರುಸಿದ್ದದೇಶೀಕೆಂದ್ರಸ್ವಾಮಿಗಳು
  4. ನಿ.ಪ್ರ.ಸ್ವ.ಶ್ರೀ ಶಿವಕುಮಾರೇಂದ್ರಸ್ವಾಮಿಗಳು
  5. ನಿ.ಪ್ರ.ಸ್ವ.ಶ್ರೀ ಚಂದ್ರಶೇಖರಸ್ವಾಮಿಗಳು
  6. ನಿ.ಪ್ರ.ಸ್ವ.ಶ್ರೀ ಶಿವಲಿಂಗಸ್ವಾಮಿಗಳು
  7. ನಿ.ಪ್ರ.ಸ್ವ.ಶ್ರೀ ಮಹಾಂತಸ್ವಾಮಿಗಳು
  8. ನಿ.ಪ್ರ.ಸ್ವ.ಶ್ರೀ ಚನ್ನಬಸಪ್ಪಸ್ವಾಮಿಗಳು
  9. ನಿ.ಪ್ರ.ಸ್ವ.ಶ್ರೀ ಮಹಾಲಿಂಗಸ್ವಾಮಿಗಳು
  10. ನಿ.ಪ್ರ.ಸ್ವ.ಶ್ರೀ ಶಾಂತಲಿಂಗಸ್ವಾಮಿಗಳು
  11. ನಿ.ಪ್ರ.ಸ್ವ.ಶ್ರೀ ಪ್ರಭುಲಿಂಗಸ್ವಾಮಿಗಳು
  12. ನಿ.ಪ್ರ.ಸ್ವ.ಶ್ರೀ ಬಸವಲಿಂಗಸ್ವಾಮಿಗಳು
  13. ನಿ.ಪ್ರ.ಸ್ವ.ಶ್ರೀ ಸಿದ್ದಲಿಂಗಸ್ವಾಮಿಗಳು
  14. ನಿ.ಪ್ರ.ಸ್ವ.ಶ್ರೀ ಬಸವಲಿಂಗಸ್ವಾಮಿಗಳು
  15. ನಿ.ಪ್ರ.ಸ್ವ.ಶ್ರೀ ಬಸವರಾಜಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ವೈಭವಯುತವಾಗಿ ಪ್ರಥಮರ ಗಣಾರಾಧನೆ ನಡೆಯುತ್ತದೆ. ಗಣಾರಾಧನೆ ಸಂದರ್ಭ ಲಿಂಗೈಕ್ಕ ಶ್ರೀ ಜಯದೇವ ಮುರುಘರಾಜೇಂದ್ರಸ್ವಾಮಿಗಳು ಭಕ್ತರೊಂದಿಗೆ ಭಾಗವಹಿಸುತ್ತಿದ್ದರು. ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಅನ್ನದಾಸೋಹ, ಜ್ಞಾನದಾಸೋಹ, ಉಪನ್ಯಾಸಗಳು, ಹರಗುರು ಚರಮೂರ್ತಿಗಳ ದರ್ಶನ ಮತ್ತು ಧಾರ್ಮಿಕ ವಿಧಿಗಳು ನಡೆಯುತ್ತವೆ. ಬಸವಜಯಂತಿ, ಶಿವರಾತ್ರಿ, ಧರ್ಮಮಾಸ ಪೂಜೆ, ಕಾರ್ತಿಕ ಪೂಜೆಯನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಸಾಮಾಜಿಕ ಕಾರ್ಯಗಳು:

ಮಠವು ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ದಾವಣಗೆರೆಯ ಹತ್ತಿರ ಶಾಖಾ ಮಠ ಸ್ಥಾಪಿಸಿ ೧ ರಿಂದ ೧೦ನೇ ತರಗತಿಯವರೆಗೆ ಶಾಲೆ, ಸಂಗೀತ ಕಾಲೇಜು, ಪ್ರಸಾದ ನಿಲಯಗಳು ಆರಂಭಿಸಲಾಗಿದೆ. ಶ್ರೀ ಬಸವರಾಜ ಸ್ವಾಮಿಗಳು ಸ್ವಾವಲಂಬನೆ ಸಾಧಿಸಿ ನಂದನವನ ರೂಪಿಸಿದ್ದಾರೆ. ಗ್ರಾಮೀಣ ಅಭಿವೃದ್ದಿಗಾಗಿ ಹಲವು ಸಮಾಜಮುಖಿ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.