ಶ್ರೀ ವಿರಕ್ತ ಮಠ,ಗೌಡಹಳ್ಳಿ

ವಿಳಾಸ:

ನಿ.ಪ್ರ.ಸ್ವ.ಶ್ರೀ ಮರಿತೋಂಟದಾರ್ಯ ಸ್ವಾಮಿಗಳವರು, ಶ್ರೀ ವಿರಕ್ತ ಮಠ,ಗೌಡಹಳ್ಳಿ ಅಂಚೆ , ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.
ಮೊ.+919731930067

ಮಠದ ವಿವರ:

ಗೌಡಹಳ್ಳಿಯಲ್ಲಿ ಸ್ಥಾಪಿತವಾದ ವಿರಕ್ತ ಮಠವು ಸುಮಾರು ೨೫೦ ರಿಂದ ೩೦೦ ವರ್ಷಗಳ ಇತಿಹಾಸ ಹೊಂದಿದೆ. ಟಿ.ನರಸೀಪುರ ತಾಲ್ಲೂಕಿನ ಕುರುಬೂರಿನ ಪೂಜ್ಯ ಮಹಾಂತಸ್ವಾಮಿಗಳಿಂದ ಅಥವಾ ಬಳ್ಳಾರಿಯಿಂದ ಬಂದ ಶ್ರೀ ಮಹಾಂತಸ್ವಾಮಿಗಳಿಂದ ಸ್ಥಾಪನೆಯಾಗಿದೆ ಎಂಬ ಎರಡು ನಂಬಿಕೆಗಳು ಪ್ರಸಿದ್ಧ. ಧರ್ಮ ಪ್ರಚಾರ, ಲಿಂಗಾರಾಧನೆ, ದಾಸೋಹ, ಮತ್ತು ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಮಠವು ಗ್ರಾಮಸ್ಥರ ಸಹಕಾರದಿಂದ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ.

ಪರಂಪರೆ:

  1. ನಿ.ಪ್ರ.ಸ್ವ.ಶ್ರೀ ಬಳ್ಳಾರಿ ಮಹಂತಸ್ವಾಮಿಗಳು
  2. ನಿ.ಪ್ರ.ಸ್ವ.ಶ್ರೀ ಸಿದ್ಧಲಿಂಗಸ್ವಾಮಿಗಳು
  3. ನಿ.ಪ್ರ.ಸ್ವ.ಶ್ರೀ ಮರಿತೋಂಟದಾರ್ಯಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

  • ಶಿವರಾತ್ರಿ ಲಿಂಗಾರಾಧನೆ
  • ಲಿಂಗದೀಕ್ಷೆ
  • ಕಾರ್ತಿಕ ಮಾಸ ಪೂಜೆ
  • ಧನುರ್ಮಾಸದ ಪೂಜೆ
  • ಬಸವಜಯಂತಿ
  • ಪ್ರತಿದಿನ ದಾಸೋಹ ವ್ಯವಸ್ಥೆ
  • ಆರಾಧನೆ ಉತ್ಸವ

ಸಾಮಾಜಿಕ ಕಾರ್ಯಗಳು:

  • ಬಸವತತ್ವ ಪ್ರಚಾರ
  • ಪೋಷ್ಠಿ ಸಭೆ ಆಯೋಜನೆ (2010-2011)
  • ಊರುಗಳಿಂದ ಊರಿಗೆ ಸಂಚಾರ ಮತ್ತು ಉಪನ್ಯಾಸ
  • ಹಳೆಯ ಮಠವನ್ನು ಕೆಡವಿದ ಮೇಲೆ ನೂತನ ಮಠ ನಿರ್ಮಾಣ ಕಾರ್ಯ